About the Temple
ಶ್ರೀ ವೆಂಕಟೇಶ್ವರ ಸ್ವಾಮಿಯ ಅನೇಕ ದೇವಾಲಯಗಳು ದೇಶದ ನಾನಾ ಭಾಗದಲ್ಲಿ, ರಾಜ್ಯದ ಹಲವಾರು ಪ್ರದೇಶಗಳಲ್ಲಿ ನೆಲೆಗೊಂಡಿವೆ. ಆದರೆ ತುಮಕೂರಿನಲ್ಲಿರುವಂತಹ ತಿರುಮಲ ತಿರುಪತಿಯ ಶ್ರೀ ವೆಂಕಟೇಶ್ವರ ಸ್ವಾಮಿ ದೇವಸ್ಥಾನ ಅದೆಲ್ಲವುಗಳಿಗಿಂತ ವಿಭಿನ್ನವಾಗಿದ್ದು, ವಿಶಿಷ್ಟ ಆಚರಣೆಗಳಿಂದ ಭಕ್ತರ ಮೊರೆಯ ಪೊರೆಯೊ ವೆಂಕಟೇಶ್ವರನ ಸನ್ನಿಧಿಯಾಗಿ ಗುರುತಿಸಿಕೊಂಡಿದೆ.
ಇಷ್ಟಾರ್ಥ ಸಿದ್ದಿಯನ್ನು ನೆರವೇರಿಸುತ್ತಾ ಶ್ರೀ ವೆಂಕಟೇಶ್ವರ ಸ್ವಾಮಿಯು ತುಮಕೂರಿನ ತನ್ನ ಭಕ್ತರ ಕಷ್ಟಗಳನ್ನ ತೀರಿಸುತ್ತಾ ಸುಖ ಶಾಂತಿ ನೆಮ್ಮದಿಯನ್ನು ನೀಡುತ್ತಾ ಬರುತ್ತಿದ್ದಾರೆ. ಶ್ರೀ ಸ್ವಾಮಿ ವೆಂಕಟೇಶ್ವರ ಇಲ್ಲಿರುವಂತಹ ದೇವಾಲಯ ಮತ್ತು ಪೂಜಾ ವಿಧಿ ವಿಧಾನ ನೋಡಲು ಎರಡು ಕಣ್ಣುಗಳು ಸಾಲದು.
Our Events